ಜೀವನ ಸಾವಿರಾರು ಕನಸುಗಳ ಜೇನುಗೂಡು…

May 30, 2008

ಸರಿಯಾದ ದಾರಿ, ಸತ್ಯ ಮತ್ತು ಸರಿಯಾದ ಜೀವನ

ಝೆನ್ ಧರ್ಮಗುರುವೊಬ್ಬ ತನ್ನ ಶಿಷ್ಯಂದಿರಿಗೆ ಧರ್ಮವನ್ನು ಬೊಧಿಸುತ್ತಾ ಹೇಳಿದ ನೀವು ನಿಮ್ಮ ನಿಜವಾದ ಸ್ವರೂಪ(ಆತ್ಮ)ವನ್ನು ಅರಿತರೆ ನಂತರ ನೀವು ಸರಿಯದ ದಾರಿ, ಸತ್ಯ ಮತ್ತು ಸರಿಯಾದ ಜೀವನವನ್ನು ಹೊಂದುವಿರಿ.

ಹಾಗಾದರೆ ಸರಿಯಾದ ದಾರಿ ಯಾವುದು? ಎಂದು ಶಿಷ್ಯನೊಬ್ಬ ಗುರುವನ್ನು ಪ್ರಶ್ನಿಸಿದ.

ಆದಕ್ಕೆ ಗುರು, ನೀನು ದಿನಾ ಯಾಕೆ ಊಟ ಮಾಡುತ್ತೀಯಾ, ಬರೀ ನಿನ್ನ ದೇಹಕ್ಕಾಗಿ, ನಿನ್ನ ಆಸೆ ತೀರಿಸಿಕೊಳ್ಳುವುದಕ್ಕಾಗಿ ಅಥವಾ ನಿನಗಾಗಿ? ಹಾಗಾದರೆ ನೀನು ಮೃಗಗಳಂತೆ ಎಂದಾಯಿತು. ಹಾಗಲ್ಲದೆ ನೀನು ತಿನ್ನುವುದು ಇತರ ಎಲ್ಲಾ ಜೀವಿಗಳಿಗಾಗಿ ಎಂದಾದರೆ ಆವಾಗ ನಿನ್ನ ಜೀವನ ಹಾಗೂ ದಾರಿ ಎರಡೂ ಸ್ಪಷ್ಟವಾಗುತ್ತದೆ. ಇದನ್ನೆ ಸರಿಯಾದ ದಾರಿ ಎನ್ನುತ್ತಾರೆ. 

ಹಾಗಾದರೆ ಸತ್ಯ ಎಂದರೇನು? ಶಿಷ್ಯ ಮತ್ತೆ ಪ್ರಶ್ನಿಸಿದ

ಅದಕ್ಕೆ ಗುರು, ನಿನಗೆ ಸರಿಯಾದ ದಾರಿ ಗೊಚರಿಸಿದ ಮೇಲೆ, ನಿನ್ನ ಮನಸ್ಸಿಗೆ ಎಲ್ಲವೂ ಸ್ಪಷ್ಟ ಹಾಗು ಆಕಾಶದಂತೆ ಶುಭ್ರವಾಗಿ ಗೊಚರಿಸುತ್ತವೆ. ಇಲ್ಲಿಂದ ಮುಂದೆ ನೀನು ಕೇಳುವ ಪ್ರತಿಯೊಂದು ಮಾತು ಹಾಗು ನೊಡುವ ಪ್ರತಿಯೊಂದು ದೃಶ್ಯ ಎಲ್ಲವೂ ಸತ್ಯ.

ಹಾಗದರೆ ಸರಿಯಾದ ಜೀವನ ಯಾವುದು? ಶಿಷ್ಯನ ಮತ್ತೊಂದು ಪ್ರಶ್ನೆ

ಅದಕ್ಕೆ ಗುರುವಿನ ಉತ್ತರ, ನಿನಗೆ ಸತ್ಯದ ಆವಿಷ್ಕಾರವಾದಮೇಲೆ ನೀನು ಕ್ಷಣದಿಂದ ಕ್ಷಣಕ್ಕೆ ಸರಿಯಾದ ಕಾರ್ಯವನ್ನು ಸರಿಯಾದವರ ಜೊತೆ ಸರಿಯಾದ ಸಮಯದಲ್ಲಿ ಮಾಡುತ್ತಾ ಬಾಳುವುದೇ ಸರಿಯಾದ ಜೀವನ. ಇದನ್ನು ಅನೇಕರು ಅನೇಕ ಹೆಸರಿನಿಂದ  ಪ್ರೀತಿ, ಅನುಕಂಪ, ದಯೆ, ಕರುಣೆ ಹಾಗು ಬೊಧಿಸತ್ವನ ದಾರಿ ಎಂದು ಕರೆಯುತ್ತಾರೆ. ಇದೇ ಸರಿಯಾದ ದಾರಿ.

 

ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ, ಹಡಗೂ ನಿನ್ನದೆ
ಮುಳುಗದಿರಲಿ ಬದುಕು —ಕೆ ಎಸ್ ಎನ್

 

ನಮ್ಮ ಕ್ಲಾಸ್

April 28, 2008

Photos of  our Photo session.

Wonderful batch of nhceSorry

   This was the day where everyone where looking like a professionals(except girls). Our class i.e., 8th Sem CS dept was the most attractive, awesome class in new horizon history . Everyone was looking awesome…….. ♥ 

 Join this group to share your happy day @nhce



Click to join nhce_cse_2008

ಶಿಕ್ಷಕರ ದಿನಾಚರಣೆ

April 14, 2008

ಗುರುಬ್ರಹ್ಮ ಗುರುರ್ವಿಷ್ಣು

ಗುರುಃದೇವೋ ಮಹೇಶ್ವರಃ

ಗುರುಸಾಕ್ಷಾತ್ ಪರಃ ಬ್ರಹ್ಮ

ತಸ್ಮೈಶ್ರೀ ಗುರವೇ ನಮಃ….

 ಮಗುವಿನ ಮನಸ್ಸು ಹಸಿ ಮಣ್ಣಿನಂತೆ. ಅದನ್ನು ಎರಡೂ ಕೈಗಳಿಂದ ಆದರದಿಂದ ತಟ್ಟಿ, ತಟ್ಟಿ ಸುಂದರವಾದ, ಕಲಾತ್ಮಕವಾದ ವಿಗ್ರಹ ರೂಪಿಸುವುದು ಗುರುವಿನ ಗುರಿ. ಗುರುವಿಲ್ಲದ ಗುರಿಯು ಕೂಡ ಸಾಧಿಸಲಸದಳ. ಅದಕ್ಕೇ ಹೇಳುವುದು ವಿದ್ಯೆಯು ದುಡ್ಡುಕೊಟ್ಟು ಖರೀದಿಸಬಲ್ಲ ಸೊತ್ತಲ್ಲ. ಅಥವಾ ವಿದ್ಯೆ ಎಂಬುದು ಮಾರಾಟದ ಸೊತ್ತೂ ಅಲ್ಲ. ವಿದ್ಯೆಯನ್ನಂತೂ ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವೇ ಇಲ್ಲ

ಬಾಲ್ಯದ ನೆನಪು

    ಈ ದಿನದಂದು ನಮಗೆ ಆಗ ಹಬ್ಬದ ಸಂಭ್ರಮ. ಡಾ. ರಾಧಾಕೃಷ್ಣನ್ ಅವರ ಭಾವಚಿತ್ರವಿರುವ ಚಿಕ್ಕ ಪೋಸ್ಟರ್ ‌‌(ನಾಲ್ಕಾಣೆ ದೇಣಿಗೆ ನೀಡಬೇಕಿತ್ತು)ಗಳನ್ನು ನೋಟ್ ಬುಕ್ ಮೇಲೆ ಅಂಟಿಸಿ ಸಂತಸಪಡುತ್ತಿದ್ದೆವು. ಶಿಕ್ಷಕರ ಕುರಿತು ಮನೆಯಲ್ಲಿ ಅಪ್ಪ ಅಮ್ಮನಿಂದ ಬರೆಯಿಸಿಕೊಂಡು ಬಂದ ಪುಟ್ಟ ಭಾಷಣ ಮಾಡಿ ಸಂತಸಪಡುತ್ತಿದ್ದೆವು- ಇದು ಪ್ರಾಥಮಿಕ ಶಾಲೆಯಲ್ಲಿನ ಸಂಭ್ರಮ.

    ಮುಂದೆ ಮಾಧ್ಯಮಿಕ ಶಾಲೆಗೆ ಬಂದಾಗ, ಶಿಕ್ಷಕ ದಿನಾಚರಣೆಗೆ ಚಿಕ್ಕವರಿದ್ದಾಗ ಕೊಡುತ್ತಿದ್ದ ಗೌರವ ಕೊಂಚ ಕಡಿಮೆಯಾಗಿತ್ತು. ಯಾಕೆಂದರೆ, ಪ್ರಾಥಮಿಕ ಶಾಲೆಯಲ್ಲಿ ಯಾವ ಶಿಕ್ಷಕರು ನಮ್ಮ “ಹೀರೋ”ಗಳಾಗಿ ಕಂಗೊಳಿಸುತ್ತಿದ್ದರೋ, ಅವರು ಈಗ ಕೊಂಚ ದುರ್ಬಲರಾಗಿ ಗೋಚರಿಸತೊಡಗಿದ್ದರು. ಹಾಗಂತ ಅವರಿಗೆ ಗೌರವ ಕೊಡುತ್ತಿರಲಿಲ್ಲವೆಂತಲ್ಲ. ಗೌರವದಲ್ಲಿ ಸ್ವಲ್ಪ ವ್ಯತ್ಯಾಸವಾಗಿರುತ್ತದೆ ಅಷ್ಟೆ.

   ಇನ್ನು ಕಾಲೇಜ್ ಮೆಟ್ಟಿಲು ಹತ್ತಿದಾಗಲಂತೂ ಶಿಕ್ಷಕರು (ಪ್ರಾಧ್ಯಾಪಕ) ಅವರೇನು ಮಹಾ ಎಂಬ ಉಡಾಫೆ ಮನೋಭಾವ ಬೆಳೆದಿರುತ್ತದೆ. ಇಂಥ ಮನೋಭಾವ ಎಲ್ಲರಲ್ಲಿಯೂ ಇರುತ್ತದೆ ಎಂದು ಹೇಳುತ್ತಿಲ್ಲ. ಬಹುಶಃ ನೂರು ಕಾಲೇಜ್ ಹುಡುಗರಲ್ಲಿ ಸುಮಾರು 80ರಷ್ಟು ಹುಡುಗರು ಇದೇ ಮನೋಭಾವ ಹೊಂದಿರಬಹುದೇನೋ. ಹೀಗಿರುವಾಗ ಶಿಕ್ಷಕ ದಿನಾಚರಣೆಯ ಮಹತ್ವ ಹೇಗೆ ಗೊತ್ತಾಗಬೇಕು? ಇಂದು ಇಂದಿನ ಶಿಕ್ಷಣ ವ್ಯವಸ್ಥೆ, ಮಕ್ಕಳ ಮನೋಭಾವ, ಶಿಕ್ಷಣದ ವಾಣಿಜ್ಯೀಕರಣ… ಇತ್ಯಾದಿಗಳ ಪ್ರಭಾವ    

ನಮ್ಮ  ಕಾಲೇಜು ಗ್ರೂಪ್ ಸೇರಲು

Click to join nhce_cse_2008